ಸಂಕಬೈಲು ಕಮಲ ಅಡಪ (90) ನಿಧನ.
ಫೆಬ್ರವರಿ 23, 2025
0
ಸಂಕಬೈಲು ಕಮಲ ಅಡಪ (90) ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ಕಡಂಬಾರು ಸಂಕಬೈಲು ನಿವಾಸಿ ದಿ. ಕುಂಞಿಣ್ಣ ಅಡಪ ತಿರುವೈಲುಗುತ್ತುರ ಧರ್ಮಪತ್ನಿ ಸಂಕಬೈಲು ಕಮಲ ಅಡಪ (90) ವಯೋಸಹಜದಿಂದ ಇಂದು ಸಂಜೆ ಸ್ವ- ಗೃಹದಲ್ಲಿ ನಿಧನರಾದರು. ಮೃತರು ಕೃಷಿಕರಾಗಿದ್ದು, ಮಕ್ಕಳಾದ: ಸಂಕಬೈಲು ಸುಧಾಕರ ಅಡಪ, ಸಂಕಬೈಲು
ಪ್ರಭಾಕರ ಅಡಪ, ಸಂಕಬೈಲು
ಸತೀಶ್ ಅಡಪ (ಯಕ್ಷ ಬಳಗ ಹೊಸಂಗಡಿ ಸಂಸ್ಥಾಪಕರು), ಸಂಕಬೈಲು ಪ್ರವೀಣ್ ಅಡಪ,
ಸಂಕಬೈಲು ಮಂಜುನಾಥ ಅಡಪ, ಸಂಕಬೈಲು
ಭಾಸ್ಕರ ಅಡಪ, ಸೊಸೆಯಂದಿರಾದ: ಕುಸುಮ, ಸುರೇಖಾ, ವಿಜಯ, ಜಯಂತಿ, ಸಿಸ್ತಿಲ, ಸಹೋದರ: ಶಿರಿಯ ಜಗನ್ನಾಥ ಶೆಟ್ಟಿ ಮುಂಬಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಬಾಲಕೃಷ್ಣ ಅಡಪ ಹಾಗೂ ಸಹೋದರರ ಪೈಕಿ ಶಿರಿಯ ಶಂಕರ ಶೆಟ್ಟಿ, ಶಿರಿಯ ವಿಶ್ವನಾಥ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9.00 ಗಂಟೆಗೆ ಸಂಕಬೈಲು ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

