Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವರ್ಕಾಡಿ ತಾಯಿಯನ್ನು ಕೊಂದ ಆರೋಪಿ ಮಗ ಕರ್ನಾಟಕದ ಕೊಲ್ಲೂರಿನಲ್ಲಿ ಸೆರೆ.

ವರ್ಕಾಡಿ ತಾಯಿಯನ್ನು ಕಿಚ್ಚಟ್ಟು ಕೊಂದ ಆರೋಪಿ ಮಗ ಕರ್ನಾಟಕದ ಕೊಲ್ಲೂರಿನಲ್ಲಿ ಸೆರೆ.
ಮಂಜೇಶ್ವರ: ಸ್ವಂತ ಹೆತ್ತಬ್ಬೆಯನ್ನು ಕೊಂದು, ಸೋದರತ್ತೆಯನ್ನು ಕೊಲೆಗೆ ಯತ್ನಿಸಿ ಪರಾರಿಯಾದ ವರ್ಕಾಡಿ ನಲ್ಲೆಂಗಿ ನಿವಾಸಿ ಮೇಲ್ವಿನ್ ನನ್ನು ಮಂಜೇಶ್ವರ ಪೊಲೀಸರು ಕುಂದಾಪುರ ಕೊಲ್ಲೂರು ಸಮೀಪದಿಂದ ಇಂದು ಇದೀಗ ಸೆರೆ ಹಿಡಿದಿದ್ದಾರೆ. ಆರೋಪಿಯ ಮೊಬೈಲ್ ಲೊಕೇಶನ್ ಅನ್ನು ಹಿಡಿದುಕೊಂಡು ಬೆಂಬತ್ತಿದ ಮಂಜೇಶ್ವರ ಪೊಲಿಸರು ಘಟನೆ ನಡೆದ ತಾಸುಗಳೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇದೀಗ ಮಂಜೇಶ್ವರಕ್ಕೆ ಕರೆ ತರಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ನಿದ್ರಿಸುತ್ತಿದ್ದ ತನ್ನ ತಾಯಿ
ಹಿಲ್ಡ ಮೊಂತೆರೋ (60) ಕಿಚ್ಚಿಟ್ಟು ಕೊಂದು ಬಳಿಕ ಪೊದೆ ಗೆಸೆದ ಬಳಿಕ, ತನ್ನ ಸಂಬಂಧಿ ಮಹಿಳೆಯನ್ನು ಕೊಲೆಗೈಯ್ಯಲುಯತ್ನಿಸಿ ಬಳಿಕ ಪರಾರಿಯಾಗಿದ್ದನು. ಇದೀಗ ಬಂಧಿಸಲ್ಪಟ್ಟ ಆರೋಪಿಯಿಂದ ಕೊಲೆಗೈಯಲು ಕಾರಣ ಏನೆಂಬುದು ಸಮಗ್ರ ತನಿಖೆಯಿಂದ ತಿಳಿದು ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.