ಬಿಜೆಪಿ ಯುವ ಮೋರ್ಚಾ ಮಂಜೇಶ್ವರ ಮಂಡಲ ವತಿಯಿಂದ "ಸ್ವಾತಂತ್ರ ರಕ್ಷಣೆ, ಸದೃಢ ಭಾರತ" ಅಂಗವಾಗಿ ಮಂಜೇಶ್ವರದಲ್ಲಿ ಬೈಕ್ ರ್ಯಾಲಿ.
ಆಗಸ್ಟ್ 11, 2024
0
ಬಿಜೆಪಿ ಯುವ ಮೋರ್ಚಾ ಮಂಜೇಶ್ವರ ಮಂಡಲ ವತಿಯಿಂದ "ಸ್ವಾತಂತ್ರ ರಕ್ಷಣೆ, ಸದೃಢ ಭಾರತ" ಅಂಗವಾಗಿ ಮಂಜೇಶ್ವರದಲ್ಲಿ ಬೈಕ್ ರ್ಯಾಲಿ.
ಮಂಜೇಶ್ವರ: ಬಿಜೆಪಿ ಯುವ ಮೋರ್ಚಾ ಮಂಜೇಶ್ವರ ಮಂಡಲ ವತಿಯಿಂದ "ಸ್ವಾತಂತ್ರ ರಕ್ಷಣೆ, ಸದೃಢ ಭಾರತ" ಅಂಗವಾಗಿ ಬೈಕ್ ರ್ಯಾಲಿ ಇಂದು ಜರಗಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿದರು.
ನೇತಾರರಾದ ಅವಿನಾಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ಜಿಲ್ಲಾಧ್ಯಕ್ಷೆ ಅಂಜು ಜೋಷ್ಟಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಕೆ.ವಿ ಭಟ್, ಯತೀರಾಜ್ ಶೇಟ್ಟಿ, ನ್ಯಾ. ನವೀನ್ ರಾಜ್, ಹರಿಶ್ಚಂದ್ರ ಎಂ, ಮೊದಲಾದವರು ಮಾತನಾಡಿದರು. ರಕ್ಷನ್ ಅಡೆಕಳಕಟ್ಟೆ ಸ್ವಾಗತಿಸಿದರು. ಬೈಕ್ ರ್ಯಾಲಿ
ಹೊಸಂಗಡಿ, ಮಿಯಪದವು, ಪೈವಳಿಕೆ, ದಾರಿಯಾಗಿ ಕುಂಬಳೆ ಯಲ್ಲಿ ಸಮಾಪನಗೊಂಡಿತು. ರಾಜ್ಯ ಕೌಂನ್ಸಿಲ್ ಸದಸ್ಯರು ವಿ. ರವೀಂದ್ರನ್ ಸಮಾರೋಪ ಭಾಷಣ ಮಾಡಿದರು.






