ಕೆರೆಕಾಡು “ಆಟಿದ ಕೂಟ” ಕಾರ್ಯಕ್ರಮ.
ಆಗಸ್ಟ್ 12, 2024
0
ಕೆರೆಕಾಡು “ಆಟಿದ ಕೂಟ” ಕಾರ್ಯಕ್ರಮ
ಕೆರೆಕಾಡು: ಶ್ರೀ ದುರ್ಗಾ ಶಕ್ತಿ ಮಹಿಳಾ ಮಂಡಲ ಕೆರೆಕಾಡು ಇದರ ಆಶ್ರಯದಲ್ಲಿ “ಆಟಿದ ಕೂಟ” ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಂಗನವಾಡಿಯಲ್ಲಿ ಸೇವೆ ಸಲ್ಲಿ ನಿವೃತ್ತಿ ಹೊಂದಿದ ಪಾರ್ವತಿ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ಕಸ್ತೂರಿ ಪಂಜ, ದುರ್ಗಾ ಶಕ್ತಿ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು, ಹಿಂದೂ ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಜೀವನ್ ಪೂಜಾರಿ, ದುರ್ಗಾ ಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಗಾಯತ್ರಿ ಉಮೇಶ್ , ಹೇಮರಾಜ್, ಬೃಜೇಶ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

