ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ನಿರ್ವಾಹಕ ನಿಧನ.
ಮಂಜೇಶ್ವರ: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ನಿರ್ವಾಹಕ ನಿಧನರಾದ ಘಟನೆ ನಡೆದಿದೆ. ಮಂಜೇಶ್ವರ ಬಳಿಯ ವರ್ಕಾಡಿ ಧರ್ಮನಗರದ ಬಾಬು ಪೂಜಾರಿ ಅವರ ಪುತ್ರ ಸುಕುಮಾರ (51) ಮೃತಪಟ್ಟವರಾಗಿದ್ದಾರೆ. ಇವರು ತಲಪ್ಪಾಡಿ - ಆನೆಕಲ್ಲು, ಉಪ್ಪಳ - ಕನ್ಯಾನ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ನ ಕಂಡೆಕ್ಟರ್ ಆಗಿ ದುಡಿದಿದ್ದರು. ಮೃತರು ಪತ್ನಿ: ಯಶೋಧ, ಪುತ್ರಿ: ಸಾನ್ವಿ, ಸಹೋದರಿಯರಾದ: ಸುಜಾತ, ಅನಿತ ಎಂಬವರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘ, ಬಸ್ ವರ್ಕರ್ಸ್ ಡೆವೆಲಪ್ಮೆಂಟ್ ಫಂಡ್ ಹೊಸಂಗಡಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
