ಅಳಿಕೆ ತೀಯಾ ಸ್ನೇಹವಾಹಿನಿ ಒಕ್ಕೂಟ ವತಿಯಿಂದ ಕಂಡದ ಕೇಸರ್ಡ್ ಕುಸಲ್ದ ಗೊಬ್ಬು "ಅಟಿದ ಅಟಿಲ್ದ ಪಂಥೋ".
ಆಗಸ್ಟ್ 13, 2024
0
ಅಳಿಕೆ ತೀಯಾ ಸ್ನೇಹವಾಹಿನಿ ಒಕ್ಕೂಟ ವತಿಯಿಂದ ಕಂಡದ ಕೇಸರ್ಡ್ ಕುಸಲ್ದ ಗೊಬ್ಬು "ಅಟಿದ ಅಟಿಲ್ದ ಪಂಥೋ".
ವಿಟ್ಲ: ಅಳಿಕೆ ತೀಯಾ ಸ್ನೇಹವಾಹಿನಿ ಒಕ್ಕೂಟ ಇದರ ವತಿಯಿಂದ ಕಂಡದ ಕೇಸರ್ಡ್ ಕುಸಲ್ದ ಗೊಬ್ಬು "ಅಟಿದ ಅಟಿಲ್ದ ಪಂಥೋ" ಕಾರ್ಯಕ್ರಮ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ.ಎಲ್. ಕೆ ಸುವರ್ಣರವರು, ಸಮಾರೋಪ ಭಾಷಣ ಮಾಡಿದರು. ನಮ್ಮ ಸನಾತನ ಸಂಸ್ಕೃತಿಯಯನ್ನು ಉಳಿಸಿ ಬೆಳೆಸುವಲ್ಲಿ ಪೂರಕ ವಾದ ಕ್ರೀಡೆಗಳನ್ನು ಸಮಾಜದ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಈ ಸಂಸ್ಥೆಯು ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ನಂತರ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಈ ವೇಳೆ ಉಪ್ಪಳ ಭಗವತಿ ಕ್ಷೇತ್ರದ ಆಚಾರ ಪಟ್ಟವರು, ಹಿರಿಯರಾದ ಗೋಪಾಲ ಅಚ್ಚ, ಬಜರಂಗದಳ ಮಂಗಲ್ಪಾಡಿ ಖಂಡ ಸಮಿತಿ ಸಂಚಾಲಕ ಸತ್ಯ ವೀರನಗರ, ಹಿಂದೂ ಐಕ್ಯ ವೇದಿ ಜಯೇಶ್, ರೂಪೇಶ್ ಶೆಟ್ಟಿ ಅಭಿಮಾನಿ ಬಳಗದ ಸಂಚಾಲಕ ಕಾರ್ತಿಕ್ ಶೆಟ್ಟಿ ವೀರನಗರ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು




