ಧಾರಾಕಾರ ಮಳೆ: ವರ್ಕಾಡಿ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿತ.
ಜುಲೈ 08, 2024
0
ಧಾರಾಕಾರ ಮಳೆ: ವರ್ಕಾಡಿ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿತ.
ಮಂಜೇಶ್ವರ: ಸುರಿಯುತ್ತಿರುವ ಧಾರಾಕಾರ ಮಳೆಗೆ ವರ್ಕಾಡಿ ಬಳಿಯ ಪಾಡ ಗುಡ್ಡೋಡಿಯಲ್ಲಿರುವ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ತರವಾಡು ಮನೆಯ ಹಿಂಬಾಗದ ಆವರಣ ಗೋಡೆ ಕುಸಿದು ಬಿದ್ದಿದೆ. ಸುಮಾರು 40 ಮೀಟರ್ ಉದ್ದ ಇರುವ ಆವರಣ ಗೋಡೆಯಾಗಿದ್ದು, ಸುಮಾರು 1 ಲಕ್ಷ ರೂಪಾಯಿ ನಾಶ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ತರವಾಡಿನ ಪ್ರಮುಖ ಡಾ. ಗಿರೀಶ್ ನಾಯ್ಕ್ ಪಂಚಾಯತ್ ಗೆ, ವಿಲೇಜ್ ಆಫೀಸ್ ಗೆ ಮಾಹಿತಿ ನೀಡಿದ್ದಾರೆ.


