ಬಿ.ಎಂ.ಎಸ್ ಸ್ಥಾಪನಾ ದಿನದ ಪೂರ್ವಭಾವಿ, ಸೇವಾ ಪ್ರವರ್ತನಾ ಕಾರ್ಯಕ್ರಮದಡಿ "ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ರುಧ್ರಭೂಮಿ"ಯಲ್ಲಿ ಕಾರ್ಯಕರ್ತರಿಂದ ಶ್ರಮದಾನ.
ಜುಲೈ 17, 2024
0
ಬಿ.ಎಂ.ಎಸ್ ಸ್ಥಾಪನಾ ದಿನದ ಪೂರ್ವಭಾವಿ, ಸೇವಾ ಪ್ರವರ್ತನಾ ಕಾರ್ಯಕ್ರಮದಡಿ "ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ರುಧ್ರಭೂಮಿ"ಯಲ್ಲಿ ಕಾರ್ಯಕರ್ತರಿಂದ ಶ್ರಮದಾನ.
ಮಂಜೇಶ್ವರ: ಜುಲೈ 23 ಬಿ.ಎಂ.ಎಸ್ ಸ್ಥಾಪನಾ ದಿನದ ಪೂರ್ವಭಾವಿ ಸೇವಾ ಪ್ರವರ್ತನಾ ಕಾರ್ಯಕ್ರಮದಂಗವಾಗಿ ಬಿ.ಎಂ.ಎಸ್ ಕುಂಜತ್ತೂರು ಘಟಕದ ವತಿಯಿಂದ "ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ರುಧ್ರಭೂಮಿ"ಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ನೆಲವನ್ನು ನಿನ್ನೆ ರಾತ್ರಿ ಶ್ರಮದಾನದ ಮೂಲಕ ಸಮತಟ್ಟುಗೊಳಿಸಲಾಯಿತು. ಇದರ ನೇತೃತ್ವವನ್ನು ಬಿ.ಎಂ.ಎಸ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ರವಿ ಮಜಾಲು, ಬಿ.ಎಂ.ಎಸ್ ಕುಂಜತ್ತೂರು ಹಾಗೂ ಕಣ್ವತೀರ್ಥ ಯೂನಿಟ್ ನ ಪದಾಧಿಕಾರಿಗಳು, ಸದಸ್ಯರು ವಹಿಸಿಕೊಂಡು ಶ್ರಮದಾನದಲ್ಲಿ ಭಾಗಿಗಳಾಗಿ ಕಾರ್ಯವನ್ನು ಯಶಸ್ವಿಗೊಳಿಸಿದರು.



