ಹೊಸಂಗಡಿ: ಶ್ರೀ ಕೃಷ್ಣ ಜನ್ಮಾಷ್ಟಮಿ, ಹೊಸಂಗಡಿ ಮೊಸರು ಕುಡಿಕೆ - 2024 ಆಮಂತ್ರಣ ಪತ್ರಿಕೆ ಬಿಡುಗಡೆ.
ಜುಲೈ 08, 2024
0
ಶ್ರೀ ಕೃಷ್ಣ ಜನ್ಮಾಷ್ಟಮಿ, ಹೊಸಂಗಡಿ ಮೊಸರು ಕುಡಿಕೆ - 2024 ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಜೇಶ್ವರ: ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ನಡೆಯುವ 13 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಿನ್ನೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ ಬಿಡುಗಡೆಗೊಳಿಸಿದರು.ಈ ವೇಳೆ ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ನ ಗೌರವ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್, ಶ್ರೀ ಅಯ್ಯಪ್ಪ ಕ್ಷೇತ್ರದ ಅರ್ಚಕ ತಿರುಮಲೇಶ್ ಆಚಾರ್ಯ, ಮೀಂಜ ಪಂ. ಸದಸ್ಯೆ ಶ್ರೀಮತಿ ಆಶಾಲತಾ ಬಿ ಎಂ, ಕ್ಷೇತ್ರದ ಪಧಾಧಿಕಾರಿಗಳಾದ ದಿನಕರ್ ಬಿಎಂ, ಚಂದ್ರಹಾಸ ಪೆಲಪ್ಪಾಡಿ, ಶ್ರೀಮತಿ ವೀಣಾ ಚಂದ್ರಹಾಸ್, ರೋಹಿತ್ ಬಿ.ಎಂ (ಮಸ್ಕತ್), ಶ್ರೀಮತಿ ಅಶ್ವಿನಿ ರೋಹಿತ್, ಸುನಿಲ್ ಕುಮಾರ್ ಹೊಸಂಗಡಿ, ಜಯಪ್ರಕಾಶ್, ಶ್ರೀಮತಿ ನಮೃತ ಜಯಪ್ರಕಾಶ್, ಹಾಗೂ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಬಾರಿಯ ಹೊಸಂಗಡಿ ಮೊಸರು ಕುಡಿಕೆ ಉತ್ಸವವು ಆಗಸ್ಟ್ ತಿಂಗಳ 26 ರಂದು ಸೋಮವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ವಿವರ ಈ 👇 ಕೆಳಗಿನಂತಿದೆ.





