ಸ್ವತಂತ್ರ ರೈತ ಸಂಘದ ಮಂಜೇಶ್ವರ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ.
ಜನವರಿ 20, 2024
0
ಸ್ವತಂತ್ರ ರೈತ ಸಂಘದ ಮಂಜೇಶ್ವರಂ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ.
ಮಂಜೇಶ್ವರ: ಮಂಜೇಶ್ವರ ಕ್ಷೇತ್ರ ಸಮಿತಿಯ ಸ್ವತಂತ್ರ ರೈತ ಸಂಗಮ ಸದಸ್ಯತ್ವದ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು. ಉಪ್ಪಳ ಸಿ.ಎಚ್ ಸೆಂಟರ್ ಕಟ್ಟಡದಲ್ಲಿ ನಡೆದ ಕೌನ್ಸಿಲ್ ಸಭೆಯನ್ನು ಜಿಲ್ಲಾಧ್ಯಕ್ಷರಾದ ಅಬ್ದುಲ್ಲ ಕುಂಞಿ ಹಾಜಿ ರವರು ಉದ್ಘಾಟಿಸಿದರು. ಪಿ.ಎಚ್. ಅಬ್ದುಲ್ ಹಮೀದ್ ಮಚ್ಚಂಪಾಡಿರವರು ಅಧ್ಯಕ್ಷತೆ ವಹಿಸಿದರು. ಖಲೀಲ್ ಮರಿಕೆ ಸಭೆಯಲ್ಲಿ ಸ್ವಾಗತಿಸಿದರು. ಮುಸ್ಲಿಂ ಲೀಗ್ ಕ್ಷೇತ್ರದ ಅಧ್ಯಕ್ಷರು ಅಝೀಝ್ ಮರಿಕೆ, ಪ್ರಧಾನ ಕಾರ್ಯದರ್ಶಿ ಎ.ಕೆ.ಆರಿಫ್, ಉಪಾಧ್ಯಕ್ಷರು ಅಂತುಂಞ ಹಾಜಿ ಚಿಪ್ಪಾರ್, ಎ.ಕೆ.ಶರೀಫ್ ಪೆರ್ಲ, ಬಿ.ಎ.ಮಜೀದ್, ಅಬ್ದುಲ್ಲಾ ಕಜೆ ಮಾತನಾಡಿದರು. ಹಸನ್ ನೇಕರೆ ಚುನಾವಣೆ ನಿಯಂತ್ರಿಸಿದರು. ಈ ವೇಳೆ ನೂತನ ಸಮಿತಿ ಪದಗ್ರಹಣ ಗೊಂಡಿತು. ಅಧ್ಯಕ್ಷರಾಗಿ ಖಲೀಲ್ ಮರಿಕೆ, ಪ್ರಧಾನ ಕಾರ್ಯದರ್ಶಿ: ಅಲಿ ಎ ಕಾದರ್ ಆನೇಕಲ್, ಕೋಶಾಧಿಕಾರಿ : ಟಿ.ಎಂ.ಹಮೀದಲಿ ಕಾಂತಲ್, ಉಪಾಧ್ಯಕ್ಷರು : ಎಂ.ಕೆ.ಅಲಿ ಮಾಸ್ಟರ್, ಮುಹಮ್ಮದ್ ಬದ್ರಿಯಾ ನಗರ, ಇಬ್ರಾಹಿಂ ಹಾಜಿ ಮಂಜೇಶ್ವರ, ಕಾರ್ಯದರ್ಶಿಗಳು : ಎಂ.ಎಚ್.ಅಬ್ದುಲ್ ರಹಮಾನ್ ಮುಗು, ಅಬ್ದುಲ್ಲಾ ಚಲಿಯಾಂಗೋಡ್ ಆಯ್ಕೆಗೊಂಡರು.



