ಕೊಯಂಬತ್ತೂರಿಂದ ಪುತ್ತೂರಿಗೆ ಹಿಂತಿರುಗುವ ಮಧ್ಯೆ ರೈಲಿನಲ್ಲಿ ಶಾರೀರಿಕ ಅಸ್ವಸ್ಥರಾಗಿ ಪುತ್ತೂರು ನಿವಾಸಿಯ ದುರ್ಮರಣ.
ಕಾಸರಗೋಡು: ಕೊಯಂಬತ್ತೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದ ಪುತ್ತೂರಿನ ವ್ಯಕ್ತಿ ಕಾಞಂಗಾಡಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ ದ.ಕ ಜಿಲ್ಲೆಯ ಪುತ್ತೂರಿನ ಉಮೇಶ ಆಚಾರ್ಯ (77) ಮೃತ ವ್ಯಕ್ತಿಯಾಗಿದ್ದಾರೆ. ಕೊಯಂಬತ್ತೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೆಸ್ಟ್ ಕಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಞಂಗಾಡು ತಲುಪುವಾಗ ಶಾರೀರಿಕ ಅಸ್ವಸ್ಥರಾದ ಇವರನ್ನು ಕೂಡಲೇ ಕಾಞಂಗಾಡಿನ ಆಸ್ಪತ್ರೆಗೆ ರೈಲಿನಿಂದಿಳಿಸಿ ಕೊಂಡೊಯ್ಯಲಾಯಿತಾದರೂ ಜೀವಾಪಾಯ ತಪ್ಪಿಸಲಾಗಲಿಲ್ಲ. ಮೃತರು ಕುಟುಂಬ ಸಂಬಂಧಿಕರ ಜತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
