ವರ್ಕಾಡಿ ಷಷ್ಠೀ ಮಹೋತ್ಸವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ.
ವರ್ಕಾಡಿ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಂಬರ್ 24 ರಿಂದ 28 ರ ವರೆಗೆ ನಡೆಯಲಿರುವ "ಷಷ್ಠೀ ಮಹೋತ್ಸವ"ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ದಿನೇಶಕೃಷ್ಣ ತಂತ್ರಿಗಳು ಬಿಡುಗಡೆ ಮಾಡಿದರು. ಪ್ರಧಾನ ಅರ್ಚಕ ಶ್ರೀ ವಾಸುದೇವ ಮಯ್ಯ, ಆಡಳಿತ ಮೊಕ್ತೇಸರ ಶ್ರೀ ಸುಭಾಸ್ ಚಂದ್ರ ಅಡಪ್ಪ, ಗೌರವಾಧ್ಯಕ್ಷ ಶ್ರೀ ದುರ್ಗಾದಾಸ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಪುರುಷೋತ್ತಮ ಶೆಟ್ಟಿ ಪಾವಳ ಮತ್ತು ಮೊಕ್ತೇಸರ ಶ್ರೀ ಶ್ಯಾಮ್ ವಿಠ್ಠಲ ಕೋಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಪ್ರಭಾಕರ್ ರೈ ಕಲ್ಪನೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ನವೆಂಬರ್ 19ರಂದು ಅಮಾವಾಸ್ಯೆ ರಂಗಪೂಜೆ, ನ. 24ರಂದು ಧ್ವಜಾರೋಹಣ, 25ರಂದು ಪಂಚಮಿ ಉತ್ಸವ, 26ರಂದು ತುಲಾಭಾರ, ಷಷ್ಠೀ ಮಹೋತ್ಸವ, ರಾತ್ರಿ ಬಲಿ ಉತ್ಸವ, 27ರಂದು ಸಪ್ತಮೀ ಉತ್ಸವ, ಶಯನ, 28 ರಂದು ಅವಭೃತ ಮತ್ತು ಧ್ವಜಾವರೋಹಣ ನಡೆಯಲಿದೆ. ಕ್ಷೇತ್ರದ ಸರ್ವ ಭಕ್ತಾದಿಗಳು ಷಷ್ಠೀ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಉತ್ಸವ ಸಮಿತಿ ಮತ್ತು ಆಡಳಿತ ಮಂಡಳಿ ಕೋರಿದೆ. ಕಾರ್ಯಕ್ರಮ ವಿವರ ಈ ಕೆಳಗಿನಂತಿದೆ.
