Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೈಲಾಗದ ಸರಕಾರದ ಡೋಂಗಿ ಬಜೆಟ್ - ಕಾಂಗ್ರೆಸ್.

ಕೈಲಾಗದ ಸರಕಾರದ ಡೋಂಗಿ ಬಜೆಟ್ - ಕಾಂಗ್ರೆಸ್.
ಮಂಜೇಶ್ವರ: ಕೇರಳದ ಎಡರಂಗ ಸರಕಾರದ ಬಜೆಟ್ ಬರೀ ಬೋಗಸ್ ಪತ್ರವಾಗಿದ್ದು, ಯಾವುದೇ ಜನೋಪಕಾರಿ ಸಲಹೆಗಳಿಲ್ಲದ ಕರಪತ್ರದಂತಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀ ಉಮ್ಮರ್ ಬೋರ್ಕಳ ಆರೋಪಿಸಿದ್ದಾರೆ. ಸಾಧ್ಯವಾಗುವ ಎಲ್ಲಾ ಹಾದಿಗಳಿಂದಲೂ ತೆರಿಗೆ ವಸೂಲಿ ಮಾಡುವುದನ್ನೇ ನಿತ್ಯ ಕಾಯಕವನ್ನಾಗಿಸಿದ ಸರ್ಕಾರ ಕಚೇರಿಗಳಲ್ಲಿ ಅಗತ್ಯ ಉದ್ಯೋಗಿಗಳನ್ನು ನೇಮಿಸಲು ಮೀನ ಮೇಷ ಎಣಿಸುತ್ತಿದೆ. ಬಿಲ್ಡಿಂಗ್ ಪರ್ಮಿಟ್ ಹೆಸರಲ್ಲಿ ಜನರನ್ನು ಅಕ್ಷರಶಃ ಲೂಟಿ ಮಾಡಲಾಗುತ್ತಿದೆ. ಶುಚಿತ್ವ ಮಾಲಿನ್ಯ ನಿಯಂತ್ರಣ ಸಂಪೂರ್ಣ ಹೆಸರಲ್ಲೂ ಭಾರೀ ದಂಡ ವಿಧಿಸಿ ಖಜಾನೆ ತುಂಬಿಸುವ ಕೆಲಸ ಮಾಡುವ ಸರ್ಕಾರವು ಮಾಲಿನ್ಯ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿರುವಾಗ ಮುಖ್ಯಮಂತ್ರಿ ಹಾಗೂ ಸಚಿವರುಗಳು ದುಂದುವೆಚ್ಚದಲ್ಲಿ ನಿರತರಾಗಿದ್ದಾರೆ. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಚಾಲ್ತಿಯಲ್ಲಿಟ್ಟಿದೆ ಎಂದು ಅವರು ಹೇಳಿದರು. ಕೇರಳ ಸರಕಾರದ ಜನವಿರೋಧಿ ಬಜೆಟ್ ನಿರ್ದೇಶನ ಹಾಗೂ ಭೂ ತೆರಿಗೆ ಹೆಚ್ಚಳ ಪ್ರತಿಭಟಿಸಿ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ವರ್ಕಾಡಿ ಗ್ರಾಮ ಕಚೇರಿ ಮುಂಭಾಗದಲ್ಲಿ ನಡೆಸಲಾದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಶ್ರೀ ಮುಹಮ್ಮದ್ ಮಜಾಲ್, ಖಲೀಲ್ ಬಜಾಲ್, ಗಣೇಶ್ ಪಾವೂರು, ಎಸ್ ಅಬ್ದುಲ್ ಖಾದರ್ ಹಾಜಿ,ಶಾಂತಾ ಆರ್ ನಾಯ್ಕ್,ಮೂಸಾಡಿಕೆ,ವಸಂತರಾಜ್ ಶೆಟ್ಟಿ, ರಾಬಿಯಾ, ಶೀನ ಕೆದುಂಬಾಡಿ, ವಿನೋದ್ ಪಾವೂರು, ಚಂದ್ರಶೇಖರ್ ಅರಿಬೈಲ್, ಬಾಸಿತ್ ತಲೆಕ್ಕಿ, ಅಶ್ರಫ್ ಕೆ,ಕೆ, ಹಮೀದ್ ಕಣಿಯೂರು, ಸಲೀಂ ಒಡಿಪ್ರಕೋಡಿ, ಖಾಲಿದ್ ಆನೆಕಲ್ಲು, ಶರೀಫ್ ಪಾಲೆಂಗ್ರಿ, ಅಬೂಸ್ವಾಲಿ, ಅಬೂಬಕ್ಕರ್ ಕೆಎಚ್,ಹಮೀದ್, ಮುಸ್ತಫಾ ವೇದೋಡಿ, ಉಮ್ಮರ್ ಪಾಲೆಂಗ್ರಿ, ಜನಾರ್ದನ ಶೆಟ್ಟಿಗಾರ್, ಸಲಾಂ ಮಾಂಕೋಡಿ, ಐತಪ್ಪ ನೀರೊಳಿಕೆ, ನೌಷಾದ್ ಕೆದಕ್ಕಾರ್,ಮಹಮೂದ್ ಅಣೆ, ಮೊಯ್ದಿನ್ ಕುಂಞಿ ಕೋಟೆಮಾರ್, ಹಸನ್ ಒಡಿಪ್ರಕೋಡಿ,ಮೂಸಾ ಅರಿಬೈಲ್ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಎ ಎಂ ಉಮ್ಮರ್ ಕುಂಞಿ ಸ್ವಾಗತಿಸಿ, ಶ್ರೀ ಸದಾಶಿವ ಕೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.