ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ನೇತೃತ್ವದಲ್ಲಿ ಅಡಿಕೆ ಬೆಳೆಗಾರರ ಸಂಗಮ ಮತ್ತು ವಿಚಾರ ಸಂಕಿರಣ.
ಜನವರಿ 22, 2025
0
ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ನೇತೃತ್ವದಲ್ಲಿ ಅಡಿಕೆ ಬೆಳೆಗಾರರ ಸಂಗಮ ಮತ್ತು ವಿಚಾರ ಸಂಕಿರಣ.
ವರ್ಕಾಡಿ: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ವತಿಯಿಂದ ಆಯೋಜಿಸಿದ ಅಡಿಕೆ ಬೆಳೆಗಾರರ ಸಂಗಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಉಧ್ಘಾಟಿಸಿ ಮಾತನಾಡಿದರು. ಕ್ಯಾಂಪ್ಕೋ ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ್ ತೋಟ್ಟೆತ್ತೋಡಿ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕರಾದ ಚಂದ್ರ ಯಂ. ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ, ಬಾಯಾರು ಶಾಖಾ ಪ್ರಂಬಧಕರಾದ ರಮೇಶ್ ವೈ. ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಮೋಹನ್ ಮಾಸ್ಟರ್, ಪ್ರಗತಿಪರ ಕೃಷಿಕರಾದ ರವಿ ಯಸ್. ಭಟ್ ಸುಣ್ಣಂಗುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು. ಈ ವೇಳೆ
ಕೃಷಿಕರೊಂದಿಗೆ ವಿಚಾರ ವಿನಿಮಯ ನಡೆಯಿತು.



