ಎಡನೀರು ಶ್ರೀಗಳು ಸಂಚರಿಸುತ್ತಿದ್ದ ವಾಹನಕ್ಕೆ ದುಷ್ಕರ್ಮಿಗಳಿಂದ ಆಕ್ರಮಣ ಒಡಿಯೂರು ಶ್ರೀ ಖಂಡನೆ.
ನವೆಂಬರ್ 06, 2024
0
ಎಡನೀರು ಶ್ರೀಗಳು ಸಂಚರಿಸುತ್ತಿದ್ದ ವಾಹನಕ್ಕೆ ದುಷ್ಕರ್ಮಿಗಳಿಂದ ಆಕ್ರಮಣ ಒಡಿಯೂರು ಶ್ರೀ ಖಂಡನೆ.
ಒಡಿಯೂರು: ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನದ ಮೇಲೆ ದುಷ್ಕರ್ಮಿಗಳು ಬೋವಿಕಾನದ ಬಾವಿಕೆರೆ ಎಂಬಲ್ಲಿ ಆಕ್ರಮಣ ನಡೆಸಿದ ಹೀನಕೃತ್ಯವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತೀವ್ರವಾಗಿ ಖಂಡಿಸಿದ್ದಾರೆ. ಮುಂದೆ ಇಂತಹ ದುಷ್ಕೃತ್ಯಗಳು ನಡೆಯದಂತೆ ಕೇರಳ ಸರಕಾರ ಕಾಳಜಿವಹಿಸಬೇಕೆಂದೂ, ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ತಕ್ಷಣ ಕ್ರಮಕೈಗೂಳ್ಳಬೇಕೆಂದು ಸ್ವಾಮೀಜಿಯವರು ಒತ್ತಾಯಿಸಿದ್ದಾರೆ.

