Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ: ಮಾಜಿ ಮುಖ್ಯಮಂತ್ರಿ ಆರ್. ಶಂಕರ್ ಪುಣ್ಯತಿಥಿ.

ಮಂಜೇಶ್ವರ: ಮಾಜಿ ಮುಖ್ಯಮಂತ್ರಿ ಆರ್. ಶಂಕರ್ ಪುಣ್ಯತಿಥಿ.
ಮಂಜೇಶ್ವರ: ಕೇರಳದ ಮಾಜೀ ಮುಖ್ಯಮಂತ್ರಿ ಆರ್. ಶಂಕರ್ ಅವರ ಪುಣ್ಯತಿಥಿ ಕಾರ್ಯಕ್ರಮ ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಇಂದು ಬೆಳಗ್ಗೆ ಜರುಗಿತು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಹಮದ್ ಮನ್ಸೂರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜೀ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪುಷ್ಪಾರ್ಚನೆಗೈದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಶಾಂತಾ ಆರ್. ನಾಯ್ಕ, ಮೊಹಮ್ಮದ್ ಮಜಾಲು, ನಾಗೇಶ್ ಮಂಜೇಶ್ವರ, ಚಂದ್ರಶೇಖರ ಶೆಟ್ಟಿ ಬೆಜ್ಜ, ಹಮೀದ್ ಕಣಿಯೂರು, ಪುರುಷೋತ್ತಮ ಅರಿಬೈಲು, ರಂಜಿತ್ ಮಂಜೇಶ್ವರ, ಬಾಬು ಬಂದ್ಯೋಡು, ಮುಂತಾದವರು ಉಪಸ್ಥಿತರಿದ್ದರು. ಹನೀಫ್ ಪಡಿಞಾರ್ ಸ್ವಾಗತಿಸಿ, ಇರ್ಷಾದ್ ಮಂಜೇಶ್ವರ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.