ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ ಮೋರ್ಚಾ ಮಂಡಲಧ್ಯಕ್ಷ, ಸಮಾಜ ಸೇವಕ ವರ್ಕಾಡಿ ಮಡಿಕ ನಿವಾಸಿ ದಿ. ಕೃಷ್ಣಪ್ಪ ಮಡಿಕರವರಿಗೆ ಬಿಜೆಪಿಯಿಂದ ನುಡಿನಮನ.
ಆಗಸ್ಟ್ 06, 2024
0
ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ ಮೋರ್ಚಾ ಮಂಡಲಧ್ಯಕ್ಷ, ಸಮಾಜ ಸೇವಕ
ವರ್ಕಾಡಿ ಮಡಿಕ ನಿವಾಸಿ ದಿ. ಕೃಷ್ಣಪ್ಪ ಮಡಿಕರವರಿಗೆ ಬಿಜೆಪಿಯಿಂದ ನುಡಿನಮನ.
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ ಮೋರ್ಚಾ ಮಂಡಲಧ್ಯಕ್ಷರಾಗಿದ್ದ ಸಮಾಜ ಸೇವಕ
ವರ್ಕಾಡಿ ಮಡಿಕ ನಿವಾಸಿ ದಿ. ಕೃಷ್ಣಪ್ಪ ಮಡಿಕರವರಿಗೆ ನುಡಿನಮನ ಕಾರ್ಯಕ್ರಮ ಇಂದು ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದೇವಾಲಯ ಪರಿಸರದಲ್ಲಿ ಜರಗಿತು.
ಪಕ್ಷದ ವತಿಯಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಬಿಜೆಪಿ
ಮಂಡಲಧ್ಯಕ್ಷ ಆದರ್ಶ ಬಿ.ಎಂ, A.K ಕಯ್ಯಾರ್, ಮುಖಂಡರಾದ ಮಣಿಕಂಠ ರೈ, ತುಳಸಿ ಕುಮಾರಿ, ಜಗದೀಶ್ ಚೆಂಡ್ಲ, ಭಾಸ್ಕರ್ ಪೊಯ್ಯೇ, ರವಿರಾಜ್, ಸಾಮಾಜಿಕ ನೇತಾರರದ ಸುಭಾಷ್ ಅಡಪ, ರಾಧಾಕೃಷ್ಣ ಹೊಳ್ಳ, ನಾಗರಾಜ್ ಭಟ್, ದೇವಪ್ಪ
ಹಾಗೂ ಅಪಾರ ಕಾರ್ಯಕರ್ತರು, ಬಂಧುಗಳು ಉಪಸ್ಥಿತರಿದ್ದರು.



