ರೈತ ಸಂಘ ಮಂಜೇಶ್ವರ ಏರಿಯಾ ಕಾರ್ಯಕರ್ತರ ಸಮಾವೇಶ.
ಆಗಸ್ಟ್ 25, 2024
0
ರೈತ ಸಂಘ ಮಂಜೇಶ್ವರ ಏರಿಯಾ ಕಾರ್ಯಕರ್ತರ ಸಮಾವೇಶ.
ಮಂಜೇಶ್ವರ: ಮಂಜೇಶ್ವರ ರೈತ ಸಂಘದ ಏರಿಯಾ ಕಾರ್ಯಕರ್ತರ ಸಮಾವೇಶವು ಇಂದು ಬೆಳಗ್ಗೆ ಹೊಸಂಗಡಿಯ ಎ.ಕೆ.ಜಿ ಭವನದ ಬಿ.ಯಂ. ರಾಮಯ್ಯ ಶೆಟ್ಟಿ ಹಾಲ್ ನಲ್ಲಿ ಜರಗಿತು. ಸಮಾವೇಶದ ಉದ್ಘಾಟನೆಯನ್ನು ಕೇರಳ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕಾ: ಕೆ. ಆರ್. ಜಯಾನಂದರವರು ನೆರವೇರಿಸಿ, ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನ ಕಾಂ. ಗೀತಾ ಸಾಮಾನಿಯವರು ವಹಿಸಿದ್ದರು. ರೈತ ಸಂಘ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಾಂ. ಅಶೋಕ್ ಭಂಡಾರಿ ಸ್ವಾಗತಿಸಿದರು. ಕಾಂ. ಚಂದ್ರಹಾಸ ಶೆಟ್ಟಿ ಮಾಸ್ತರ್, ಕಾಂ. ಕಮಲಾಕ್ಷ ಕನಿಲ ಸಭೆಯನ್ನುದ್ದೇಶಿಸಿ ಮಾತನಾಡಿದರು.




