Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ.

ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ.
ಪೈವಳಿಕೆ: ಗ್ರಂಥ ಶಾಲಾ, ಅಧ್ಯಾಪಕ ಚಳವಳಿಗಳ ಜಿಲ್ಲೆಯ ಹಿರಿಯ ನಾಯಕ, ಪೈವಳಿಕೆಯ ಕುರುವೇರಿಯ ಎಸ್ ನಾರಾಯಣ ಭಟ್( 88 ) ಕೋಝಿಕ್ಕೋಡ್ ನಲ್ಲಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಮೃತರು ಮುಳಿಗದ್ದೆ ಹೆದ್ದಾರಿ ಎ.ಯು.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರು. ಇವರು ಗ್ರಂಥ ಶಾಲಾ ಸಂಘದ ಸಂಸ್ಥಾನ ಕೌನ್ಸಿಲರ್, ಅಧ್ಯಾಪಕ ಸಂಘಟನೆ ಕೆ.ಎಸ್.ಟಿ.ಎ ಯ ಪ್ರಾಂತ್ಯ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನ ಪ್ರಥಮ ಅಧ್ಯಕ್ಷ, ಅವಿಭಜಿತ ಕಾಸರಗೋಡು ತಾಲೂಕು ಲೈಬ್ರೆರಿ ಕೌನ್ಸಿಲ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಇಂದು ಅಪರಾಹ್ನ 3 ಗಂಟೆಗೆ ಕುರುವೇರಿ ಸ್ವಗೃಹ ದಲ್ಲಿ ಜರಗಲಿದೆ. ಮೃತರು: ತಂದೆ ಗಣಪತಿ ಭಟ್, ತಾಯಿ ಗಂಗಮ್ಮ, ಪತ್ನಿ: ಲಕ್ಷ್ಮಿ, ಮಕ್ಕಳಾದ: ಗಣೇಶ್ ಭಟ್, ರೇಖಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.