ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರಕ್ಕೆ I.U.M.L ಮಾರ್ಚ್ ಹಾಗೂ ಧರಣಿ.
ಜುಲೈ 30, 2024
0
ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರಕ್ಕೆ I.U.M.L ಮಾರ್ಚ್ ಹಾಗೂ ಧರಣಿ.
ಮಂಜೇಶ್ವರ: ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಸಂಜೆಯ ತನಕ ಒ.ಪಿ ವಿಭಾಗ ತೆರೆಯಬೇಕು, ರಜಾದಿನಗಳಲ್ಲಿಯೂ ಒ.ಪಿ ವಿಭಾಗ ತೆರೆಯಬೇಕು, ಲ್ಯಾಬ್ ಪ್ರವರ್ತಿಸಬೇಕು, ಆಂಬುಲೆನ್ಸ್ ಸೇವೆ ಲಭ್ಯಗೊಳಿಸಬೇಕು, ಹೆಚ್ಚಿಸಿದ ಒ.ಪಿ ದರ ಹಿಂತೆಗೆಯಬೇಕು ಮುಂತಾದ ಬೇಡಿಕೆಗಳನ್ನಿಟ್ಟು I.U.M.L ವರ್ಕಾಡಿ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಾರ್ಚ್ ಹಾಗೂ ಧರಣಿ ನಡೆಯಿತು. I.U.M
L ಮಂಜೇಶ್ವರ ಮಂಡಲ ಅಧ್ಯಕ್ಷ ಅಜೀಜ್ ಹಾಜಿ ಮರಿಕೆ ಉದ್ಘಾಟಿಸಿದರು. K. ಮುಹಮ್ಮದ್ ಪಾವೂರು ಅಧ್ಯಕ್ಷತೆ ವಹಿಸಿದರು. A.K ಆರಿಫ್ ಮುಖ್ಯ ಭಾಷಣಗೈದರು. ಸೈಫುಲ್ಲ ತಂಗಲ್ ಮಂಜೇಶ್ವರ, ಅಬ್ದುಲ್ಲ ಮಾದೇರಿ, ಮೂಸ ಹಾಜಿ ತೋಕೆ ಮೊದಲಾದವರು ಮಾತನಾಡಿದರು. ಅಬ್ದುಲ್ ಮಜೀದ್ B.A ಸ್ವಾಗತಿಸಿ, ಹಾರಿಸ್ ಪಾವೂರು ವಂದಿಸಿದರು. VS ಮುಹಮ್ಮದ್ ಧರ್ಮನಗರ, ಉಮರಬ್ಬ ಆನೆಕಲ್, ಬಾವಹಾಜಿ ಅರಿಬೈಲ್, ಇಬ್ರಾಹಿಂ ಕಜೆ, ಅಲಿ ಎ ಕಾದರ್ ಆನೆಕಲ್, ರಝಕ್ ಕೆದಂಬಾಡಿ, ಬದ್ರುದ್ದೀನ್ ಪಾವೂರು, ಸಲೀಂ ಧರ್ಮನಗರ, ಮುತ್ತಲಿಬ್ ಕೆದಂಬಾಡಿ, ಲತೀಫ್ ತೋಕೆ, ಮುಹಮ್ಮದ್ ಬಟ್ಯಾಡ್ಕ, ಅಬ್ದುಲ್ಲ ಬಹರೈನ್, ಮೊಯಿದಿನ್ ಕುಂಞಿ ನಂದ್ರಬೈಲ್, D.B.A ಖಾದರ್, K
M ಅಶ್ರಫ್, ಹಾರಿಸ್ ಬದ್ರಿ, ಅಹ್ಮದ್ ಕುಂಞಿ ಒಡಂಗಳ, ಹಮೀದ್ ನೆಲ್ಲೆಂಗಿ, ರಜಾಕ್ ಸೂಫಿನಗರ, ಕರೀಂ ಪಾತೂರು, ಸವಾದ್ ಪಾತೂರು, ಕಲೀಲ್ ಕೋಡಿ C.M ನಗರ್, R.K ರಝಕ್ ಧರ್ಮನಗರ ಮೊದಲಾದವರು ಮಾರ್ಚ್ ಗೆ ನೇತೃತ್ವ ನೀಡಿದರು.


