Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಸರಗೋಡು ಶ್ರೀ ವಿಶ್ವ ಬ್ರಾಹ್ಮಣ ಸಮಾಜಸೇವಾ ಸಂಘದ ವಾರ್ಷಿಕ ಮಹಾಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.

ಕಾಸರಗೋಡು ಶ್ರೀ ವಿಶ್ವ ಬ್ರಾಹ್ಮಣ ಸಮಾಜಸೇವಾ ಸಂಘದ ವಾರ್ಷಿಕ ಮಹಾಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.
ಕಾಸರಗೋಡು: ನಗರದ ಕರಂದಕ್ಕಾಡ್ ನಲ್ಲಿರುವ ಶ್ರೀ ವಿಶ್ವ ಬ್ರಾಹ್ಮಣ ಸಮಾಜಸೇವಾ ಸಂಘದ ವಾರ್ಷಿಕ ಮಹಾಸಭೆ ಕಾಸರಗೋಡು ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ. ಭುವನೇಶ ಆಚಾರ್ಯ ತಾಳಿಪಡ್ಪು ವಹಿಸಿದ್ದರು. ಗತ ವರ್ಷದ ಲೆಕ್ಕಪತ್ರವನ್ನು ಎನ್.ಆರ್ ಪ್ರವೀಣ ಆಚಾರ್ಯ ಮಂಡಿಸಿ, ಕೆ.ಜಿ ಗಣೇಶ್ ಆಚಾರ್ಯ ವರದಿ ವಾಚಿಸಿದರು. ಬಳಿಕ 2024 - 2026 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಕೆ. ಭುವನೇಶ ಆಚಾರ್ಯ ತಾಳಿಪಡ್ಪು, ಉಪಾಧ್ಯಕ್ಷರಾಗಿ ಡಿ. ಸುರೇಶ ಆಚಾರ್ಯ ವಿವೇಕನಂದ ನಗರ, ಕಾರ್ಯದರ್ಶಿಯಾಗಿ; ಕೆ.ಜಿ. ಗಣೇಶ ಆಚಾರ್ಯ, ಜತೆ ಕಾರ್ಯರ್ದಶಿಯಾಗಿ ತುಕರಾಮ ಆಚಾರ್ಯ ಕೆರೆಮನೆ, ವೇಣುಗೋಪಾಲ ಆಚಾರ್ಯ ನೆಕ್ರಾಜೆ, ಕೋಶಾಧಿಕಾರಿಯಾಗಿ ಎನ್. ಆರ್. ಪ್ರವೀಣ ಆಚಾರ್ಯ ನಲ್ಕ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪೆರ್ಣೆ ವಿಷ್ಣು ಆಚಾರ್ಯ ವಿವೇಕನಂದ ನಗರ, ಕಲ್ಮಾಡಿ ಸದಾಶಿವ ಆಚಾರ್ಯ ಬೀರಂತಬೈಲು, ಆನೆಬಾಗಿಲು ಯಜ್ಞೇಶ ಆಚಾರ್ಯ, ಪ್ರಕಾಶ ಆಚಾರ್ಯ ಅಣಂಗೂರು, ಗಣೇಶ ಆಚಾರ್ಯ ಅಶ್ವಿನಿ ನಗರ, ಸುದೀಶ ಆಚಾರ್ಯ ಅಶ್ವಿನಿ ನಗರ, ಸ್ವರ್ಗ ಭವಾನಿ ಶಂಕರ ಆಚಾರ್ಯ, ಅಮೈ ನಿರಂಜನ ಅಚಾರ್ಯ ವಿವೇಕನಂದ ನಗರ, ಬಿ.ಎಮ್ ಗಿರೀಶ ಆಚಾರ್ಯ ಕೂಡ್ಲು, ಅಮೈ ಹರೀಶ ಆಚಾರ್ಯ ವಿವೇಕ ನಂದನಗರ, ವಸಂತ ಆಚಾರ್ಯ ಕೆರಮನೆ, ಶ್ರೀಮತಿ ವೇದಾವತಿ ಸದಾಶಿವ ಆಚಾರ್ಯ ಬೀರಂತಬೈಲು, ಬೋವಿಕ್ಕಾನ ಶೀತಲ್ ಆಚಾರ್ಯ ಕೇಳುಗುಡ್ಡೆ, ಎಡನೀರು ಶ್ರೀಧರ ಆಚಾರ್ಯ, ಆನೆಬಾಗಿಲು ಹರೀಶ ಆಚಾರ್ಯ ಪರಕ್ಕಿಲ ಮೊದಲಾದವರು ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.