ದೇಶಮಂಗಲ ಸಮಜ್ಞ ಆರ್ಟ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ತೃತೀಯ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 1 ರಂದು. ಆಮಂತ್ರಣ ಪತ್ರಿಕೆ ಬಿಡುಗಡೆ.
ಜುಲೈ 29, 2024
0
ದೇಶಮಂಗಲ ಸಮಜ್ಞ ಆರ್ಟ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ತೃತೀಯ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 1 ರಂದು. ಆಮಂತ್ರಣ ಪತ್ರಿಕೆ ಬಿಡುಗಡೆ.
ಕಾಸರಗೋಡು: ದೇಶಮಂಗಲ ಸಮಜ್ಞ ಆರ್ಟ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ತೃತೀಯ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆಪ್ಟೆಂಬರ್ 1 ರಂದು ಆದಿತ್ಯವಾರ ದೇಶ ಮಂಗಲದ ಕ್ಲಬ್ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ಅಪರಾಹ್ನ ಕ್ಲಬ್ ನ ಪರಿಸರದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಶರತ್ ಕೆ.ಜೆ ಆಚಾರ್ಯ, ಮಧೂರು ಶ್ರೀ ಕಾಳಿಕಾಂಬ ಮಠದ ಉಪಾಧ್ಯಕ್ಷರಾದ ಕೆ. ಜಗದೀಶ್ ಆಚಾರ್ಯ ಕಂಬಾರು, ಮಹೇಶ್ ಆಚಾರ್ಯ ಮಧೂರು, ಅಶೋಕ ಅರಣಗುಡ್ಡೆ, ಮಹೇಶ್ ಕುಮಾರ್ ಎಂ.ಬಿ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ: ಮಿಥುನ್ ಕೆ.ಎಲ್ ಸ್ವಾಗತಿಸಿ, ಕೋಶಧಿಕಾರಿ: ಹೃತಿಕ್ ಆಚಾರ್ಯ ಕಂಬಾರು ವಂದಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಸಂಸ್ಥೆಯ ತೃತೀಯ ವಾರ್ಷಿಕೋತ್ಸವದ ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ.👇


