Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಿಪಿಐ ನೇತಾರ ಎಂ ಕೃಷ್ಣ ಶೆಟ್ಟಿ ಮೂಡಂಬೈಲು 16 ನೇ ಚರಮ ವಾರ್ಷಿಕ.

ಸಿಪಿಐ ನೇತಾರ ಎಂ ಕೃಷ್ಣ ಶೆಟ್ಟಿ ಮೂಡಂಬೈಲು 16 ನೇ ಚರಮ ವಾರ್ಷಿಕ ಸಂಸ್ಮರಣೆ.
ಮಂಜೇಶ್ವರ: ಸಿಪಿಐ ಮಂಜೇಶ್ವರ ಮಂಡಲ‌ ಮಾಜಿ ಕಾರ್ಯದರ್ಶಿ, ಕಿಸಾನ್ ಸಭಾದ ರಾಜ್ಯ ಸಮಿತಿ ಸದಸ್ಯರು, ಮಜಿಬೈಲು ಸೇವಾ ಸಹಕಾರಿ ಬ್ಯಾಂಕಿನ ದೀರ್ಘಕಾಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮ್ಯೂನಿಸ್ಟ್‌ ನೇತಾರ
ಮೂಡಂಬೈಲು ಎಂ. ಕೃಷ್ಣ ಶೆಟ್ಟಿಯವರ 16 ನೇ ಚರಮ ವಾರ್ಷಿಕ ಕಾರ್ಯಕ್ರಮ ಅವರ ನಿವಾಸದ ಸ್ಮೃತಿ ಮಂಟಪದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರು ಉದ್ಘಾಟಿಸಿದರು. ಸತೀಶ್ ಪಜಿಂಗಾರ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯರು, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು, ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಕರಿಬೈಲು, ಸಿಪಿಐ ಕಡಂಬಾರು‌ ಲೋಕಲ್ ಕಾರ್ಯದರ್ಶಿ ಹರೀಶ್ ಕೆ.ಆರ್, ಮೂಡಂಬೈಲು ಬ್ರಾಂಚ್ ಕಾರ್ಯದರ್ಶಿ ಆದರ್ಶ್ ಸಂತಡ್ಕ, ಕಿಶೋರ್ ಕುಳೂರು, ಹರಿಜೀವನ್ ದಾಸ್,ಎಂ. ಕೃಷ್ಣ ಶೆಟ್ಟಿಯವರ ಪತ್ನಿ: ಸರೋಜಿನಿ ಶೆಟ್ಟಿ, ಪುತ್ರಿ: ಶಶಿಕಲ, ಸೊಸೆ: ರೇಖಾಮಣಿ ಮೊದಲಾದವರು ಭಾಗವಹಿಸಿದರು. ಸಿಪಿಐ ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.