ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ "ಯಕ್ಷಗಾನ ತರಬೇತಿ".
ಮೇ 14, 2025
0
ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ "ಯಕ್ಷಗಾನ ತರಬೇತಿ".
ಮಂಜೇಶ್ವರ: ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಛತ್ರ ಆನೆಕಲ್ಲಿನಲ್ಲಿ ಯಕ್ಷಗಾನ ತರಬೇತಿಯನ್ನು ದೀಪ ಬೆಳಗಿಸುವ ಮೂಲಕ ಕ್ಷೇತ್ರ ಪವಿತ್ರ ಪಾಣಿ ಶ್ರೀ ನಾಣಿತ್ತಿಲು ಮಹಾಲಿಂಗೇಶ್ವರ ಭಟ್ ಪಾರೆಕುಂಡಡ್ಕ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಜಗದೀಶ್ ಅಂಗ್ರಿ ತರಗತಿಯ ಬಗ್ಗೆ ವಿವರಿಸಿದರು. ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ಯನ್. ಟಿ. ರೈ ಸೇನ್ಯ ಕಲ್ಲಾಡಿಗುತ್ತು ಶುಭ ಹಾರೈಸಿದರು . ವೇದಿಕೆಯಲ್ಲಿ ಮೆನೇಜಿಂಗ್ ಟ್ರಸ್ಟಿ ಕೃಷ್ಣ ನಾಯ್ಕ್ ಸೊಡಂಕೂರು , ಭಜನಾ ಗುರುಗಳಾದ ಶ್ರೀ ರoಜನ್ ವಗೆನಾಡು , ವಾರ್ಡ್ ಸದಸ್ಯೆ ಶ್ರೀಮತಿ ಸೀತ , ಹಿರಿಯರಾದ ಶ್ರೀ ಮಹಾಲಿಂಗ ಭಟ್ ಪಜ್ವ
ಮಾತೃ ಮoಡಳಿಯ ಅಧ್ಯಕ್ಷೆ ಶ್ರೀಮತಿ ಮಮತ ಮುಗುಳಿ ಉಪಸ್ಥಿತರಿದ್ದರು. ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕಾರ್ತಿಕ್ ನಾಣಿಲ್ತಡಿ ಸ್ವಾಗತಿಸಿ, ವಂದಿಸಿದರು.

