ಸ್ಕೂಟರ್ ಹಿಂಭಾಗಕ್ಕೆ ಲಾರಿ ಡಿಕ್ಕಿ. ಹಿಂಬದಿ ಸವಾರ ಉಪ್ಪಳ ನಿವಾಸಿ ಅನ್ವಾಸ್ (24) ಮೃತ್ಯು.
ಮಾರ್ಚ್ 13, 2025
0
ಸ್ಕೂಟರ್ ಹಿಂಭಾಗಕ್ಕೆ ಲಾರಿ ಡಿಕ್ಕಿ. ಹಿಂಬದಿ ಸವಾರ ಉಪ್ಪಳ ನಿವಾಸಿ ಅನ್ವಾಸ್ (24) ಮೃತ್ಯು.
ಮಂಜೇಶ್ವರ: ಸ್ಕೂಟರ್ ನ ಹಿಂಬಾಗಕ್ಕೆ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಚಾಲಕ ಮೃತಪಟ್ಟ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಬಳಿಯ ಉದ್ಯಾವರದಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಉಪ್ಪಳ ನಿವಾಸಿ ಅನ್ವಾಸ್ (24) ಮೃತಪಟ್ಟಿದ್ದು, ಬೈಕ್ ಸವಾರ ಅಂಗಡಿಮೊಗರು ನಿವಾಸಿ ಫಸಲ್ ರಹಿಮಾನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ತಾವು ತೆರಳುವ ಇಲೆಕ್ಟ್ರಿಕ್ ಸ್ಕೂಟರ್ ನ್ನು ಚಾರ್ಚ್ ಮಾಡಲು ತಲಪಾಡಿ ಭಾಗಕ್ಕೆ ತೆರಳುವ ವೇಳೆ ಘಟನೆ ನಡೆದಿದೆ. ಮಾಹಿತಿಯನ್ನರಿತು ಮಂಜೇಶ್ವರ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

