ಹಿರಿಯ ಸಿಪಿಐ ನೇತಾರ ಉದ್ಯಾವರ ಮಾಡ ನಿವಾಸಿ ರಾಘವ ಪಟ್ನರವರ ಪ್ರಥಮ ಪುಣ್ಯತಿಥಿ. ಸ್ಮೃತಿ ಮಂಟಪದಲ್ಲಿ ನೇತಾರರಿಂದ ಪುಷ್ಪಾರ್ಚನೆ.
ಜನವರಿ 20, 2025
0
ಹಿರಿಯ ಸಿಪಿಐ ನೇತಾರ ಉದ್ಯಾವರ ಮಾಡ ನಿವಾಸಿ ರಾಘವ ಪಟ್ನರವರ ಪ್ರಥಮ ಪುಣ್ಯತಿಥಿ. ಸ್ಮೃತಿ ಮಂಟಪದಲ್ಲಿ ನೇತಾರರಿಂದ ಪುಷ್ಪಾರ್ಚನೆ.
ಮಂಜೇಶ್ವರ: ಹಿರಿಯ ಸಿಪಿಐ ನೇತಾರ ರಾಘವ ಪಟ್ನ ಅವರ ಪ್ರಥಮ ಪುಣ್ಯತಿಥಿಯನ್ನು ಅವರ ಸ್ವ-ಗೃಹ ಉದ್ಯಾವರ ಮಾಡದಲ್ಲಿರುವ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆಗೈಯುವ ಮೂಲಕ ನಡೆಯಿತು. ಶ್ರೀಧರ್ ಆರ್.ಕೆ ಅಧ್ಯಕ್ಷತೆ ವಹಿಸಿದ್ದರು. ಕೇಶವ ಕಣ್ವತೀರ್ಥ ಧ್ವಜಾರೋಹಣಗೈದರು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಬಡಾಜೆ, ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯೆ ನಾರಾಯಣಿ ರಾಜನ್, ಎಐಟಿಯುಸಿ ಮುಖಂಡ ಮುಸ್ತಫಾ ಕಡಂಬಾರ್, ಸಿಪಿಐ ಮುಖಂಡರಾದ ನಾರಾಯಣ ಕಾಜೂರ್, ಮೊನಚ್ಚ ಕುಚ್ಚಿಕಾಡ್, ಕಿರಣ್ ಮಾಡ, ನಿರಂಜನ್, ಉಮೇಶ್ ಕುಚ್ಚಿಕ್ಕಾಡ್, ಎಐವೈಎಫ್ ಮುಖಂಡರಾದ ರಮ್ಯಾರಾಜನ್, ಪ್ರಥಮ್ ಕೆ.ಎಸ್, ಪ್ರೀತಮ್ ಮಾಡ ಹಾಗೂ ರಾಘವ ಪಟ್ನರ ಕುಟುಂಬಸ್ಥರು ಉಪಸ್ಥಿತರಿದ್ದರು.




