ಮರ ಕಡಿಯುತ್ತಿರುವ ವೇಳೆ ಮರ ಮೈಮೇಲೆ ಬಿದ್ದು ಮುರತ್ತನೆ ಬಳಿಯ ಗಾಂಧಿನಗರ ನಿವಾಸಿ ಅಬ್ದುಲ್ ಸತ್ತಾರ್ (40) ದಾರುಣ ಮೃತ್ಯು.
ಡಿಸೆಂಬರ್ 05, 2024
0
ಮರ ಮೈಮೇಲೆ ಬಿದ್ದು ಯುವಕ ಮೃತ್ಯು.
ಮಂಜೇಶ್ವರ : ಮರ ಕಡಿಯುತ್ತಿದ್ದ ವೇಳೆ ಮರ ಮೈಮೇಲೆ ಬಿದ್ದು ಯುವಕ ಸಾವಿಗೀಡಾದ ಘಟನೆ ಕಡಂಬಾರು ಬಳಿಯ ಇಡಿಯದಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡಿಯದ ಸಂಜೀವ ಎಂಬವರ ಹಿತ್ತಲಿನಲ್ಲಿ ಮರ ಕಡಿಯುವಾಗ ಈ ದುರ್ಘಟನೆ ಸಂಭವಿಸಿದೆ. ವರ್ಕಾಡಿ ಗಾಂಧಿನಗರ ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಸತ್ತಾರ್(40) ಎಂಬವರ ಮೈಮೇಲೆ ಮರ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಮೃತದೇಹವನ್ನು ಮಂಜೇಶ್ವರದ ಸಮಾಜ ಸೇವಕ ಅಸ್ಲಾಂರವರ ಆಂಬುಲೆನ್ಸ್ ನಲ್ಲಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

