Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಾಯದಲ್ಲಿ ಎಡರಂಗ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ.

ಸಾಯದಲ್ಲಿ ಎಡರಂಗ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ.
ಮಂಜೇಶ್ವರ: ಎಣ್ಮಕಜೆ ಗ್ರಾಮ ಪಂಚಾಯತಿನ 1ನೇ ವಾರ್ಡ್‌ ಸಾಯದಲ್ಲಿ ಎಲ್‌ಡಿಎಫ್‌ನ ಸಕ್ರಿಯ ಕಾರ್ಯಕರ್ತರಾದ ಗೋವಿಂದ ನಾಯ್ಕ್ ಬಿ ಬಾಕಿಲಪದವು,ಚಂದ್ರಶೇಖರ ಬಾಕಿಲಪದವು,ರಾಮಚಂದ್ರ ನಾಯ್ಕ್ ,ಜಾನಪ್ಪ ನಾಯ್ಕ ಕಲ್ಯಾಟೆ,ಪ್ರಭಾಕರ ಬಾಕಿಲಪದವು,ಕೃಷ್ಣ ನಾಯ್ಕ ಬಾಕಿಲಪದವು ಮೊದಲಾದವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಡರಂಗದ ಅತೃಪ್ತಿ ಮತ್ತು ಕಾರ್ಯಕರ್ತರ ಕಡೆಗಣನೆಯನ್ನು ಖಂಡಿಸಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಕಾಂಗ್ರೆಸ್ ಪಕ್ಷಕ್ಕೆ ಸ್ಬಾಗತಿಸಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ, ಕಾಂಗ್ರೆಸ್ ನೇತಾರಾದ ಅಮು ಅಡ್ಕಸ್ಥಳ ಐತಪ್ಪ ಕುಲಾಲ್, ಜಯಶ್ರೀ ಕುಲಾಲ್, ಕೇಪು ಗ್ರಾಮ ಪಂಚಾಯತ್ ಸದಸ್ಯ‌ ಅಬ್ದುಲ್ ಕರೀಂ ಕುದ್ದುಪದವು, ವಾರ್ಡ್ ಸಮಿತಿ ಅಧ್ಯಕ್ಷರಾದ ಎ ಆರ್ ಶರೀಫ್ ಚವರ್ಕಾಡ್, ಶಿವಪ್ಪ ನಾಯ್ಕ ಸಾಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.