ವಿಟ್ಲ ನೆತ್ತರಕೆರೆ ನಿವಾಸಿ, ಹಿರಿಯ ಬಡಗಿ ಸೀತಾರಾಮ ಆಚಾರ್ಯ (87) ಅಲ್ಪ ಕಾಲದ ಅಸೌಖ್ಯದಿಂದ ನಿಧನ.
ಏಪ್ರಿಲ್ 19, 2024
0
ವಿಟ್ಲ ನೆತ್ತರಕೆರೆ ನಿವಾಸಿ, ಹಿರಿಯ ಬಡಗಿ ಸೀತಾರಾಮ ಆಚಾರ್ಯ (87) ಅಲ್ಪ ಕಾಲದ ಅಸೌಖ್ಯದಿಂದ ನಿಧನ.
ವಿಟ್ಲ: ನೆತ್ತರಕೆರೆ ನಿವಾಸಿ ಸೀತಾರಾಮ ಆಚಾರ್ಯ (87) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ 3.00 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಬಡಗಿ ವೃತ್ತಿಯಲ್ಲಿದ್ದು, ವಿಟ್ಲದ ಸಾಲೆತ್ತೂರು ರಸ್ತೆಯಲ್ಲಿ ಅಂಗಡಿಯನ್ನು ಹೊಂದಿದ್ದರು. ಮೃತರ ಪತ್ನಿ ರಾಜೀವಿ ಈ ಹಿಂದೆ ನಿಧನರಾಗಿದ್ದು, ಮಕ್ಕಳಾದ: ಗೋಪಾಲಕೃಷ್ಣ ಆಚಾರ್ಯ, ಮೋಹನ ಆಚಾರ್ಯ, ಚಂಚಲಾಕ್ಷಿ, ಭುವನೇಶ್ವರಿ, ಜಯಲಕ್ಷ್ಮೀ, ಅಳಿಯಂದಿರಾದ ನಾಗರಾಜ ಆಚಾರ್ಯ ಮಂಜೇಶ್ವರ, ಚಂದ್ರಶೇಖರ ಆಚಾರ್ಯ ಕಾಸರಗೋಡು, ತಾರಾನಾಥ ಆಚಾರ್ಯ ಮಂಚಿ, ಸೊಸೆಯಂದಿರಾದ: ಧನಲಕ್ಷ್ಮೀ, ಗಾಯತ್ರಿ, ಏಕ ಸಹೋದರಿ: ಸುನಂದಾ ಆಚಾರ್ಯ ರಾಮತ್ತ ಮಜಾಲ್, ಹೊಸಂಗಡಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ
ಅಂತ್ಯಕ್ರಿಯೆ ಇಂದು ಅಪರಾಹ್ನ 12.30 ಕ್ಕೆ ವಿಟ್ಲ ಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ.

