Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸ್ಟೇಷನರಿ ವಸ್ತುಗಳಿಂದಲೇ ಹೆಸರುವಾಸಿಯಾಗಿರುವ ಸುದೀರ್ಘ 44 ವರ್ಷಗಳ ಐತಿಹ್ಯ ಹೊಂದಿದ್ದ ಹೊಸಂಗಡಿ "ನವೀನ್ ಸ್ಟೋರ್" ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ನಿಧನ.

ಸ್ಟೇಷನರಿ ವಸ್ತುಗಳಿಂದಲೇ ಹೆಸರುವಾಸಿಯಾಗಿರುವ ಸುದೀರ್ಘ 44 ವರ್ಷಗಳ ಐತಿಹ್ಯ ಹೊಂದಿದ್ದ ಹೊಸಂಗಡಿ "ನವೀನ್ ಸ್ಟೋರ್" ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ನಿಧನ.
ಮಂಜೇಶ್ವರ: ಸಿಪಿಐ (ಎಂ) ನ ಹಿರಿಯ ಕಾರ್ಯಕರ್ತ, ಕರ್ಷಕ ಸಂಘದ ಅನುಯಾಯಿ, ಹೊಸಂಗಡಿ ರಾಮತ್ತಮಜಾಲ್ ಸಾರ್ವಜನಿಕ ರುಧ್ರಭೂಮಿ ಸಮಿತಿಯ ಪದಾಧಿಕಾರಿ, ಹೊಸಂಗಡಿ "ನವೀನ್ ಸ್ಟೋರ್" ನ ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ಹೃದಯಾಘಾತಗೊಂಡು ನಿನ್ನೆ ರಾತ್ರಿ ಕುಂಬಳೆಯ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಇಂದು ಬೆಳಿಗ್ಗೆ 11:30ಕ್ಕೆ ನಿಧನರಾದರು. ಮೃತರು ಪತ್ನಿ ಪ್ರೇಮಲತಾ ಟೀಚರ್, ಮಕ್ಕಳಾದ: ದಯಾಕರ, ಸುಪ್ರಿಯ, ಸೊಸೆ: ಸುಜಾತ, ಅಳಿಯ: ಜಗನ್ನಾಥ ಚೆನ್ನೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಕಳೆದ 44 ವರ್ಷಗಳಿಂದ ಹೊಸಂಗಡಿ ರೈಲ್ವೆ ಗೇಟ್ ಬಳಿ ಕಾರ್ಯಾಚರಿಸುತ್ತಿರುವ "ನವೀನ್ ಸ್ಟೋರ್" ನಾಮಂಕಿತದ ಬುಕ್ ಸ್ಟೇಷನರಿ ಸಂಸ್ಥೆಯ ಮಾಲಕರಾಗಿದ್ದರು. ಮೃತದೇಹವನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ಮನೆಗೆ ತರಲಾಗುವುದು. 11 ಗಂಟೆಗೆ ರಾಮತ್ತ ಮಜಾಲ್ ಸಾರ್ವಜನಿಕರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಕೃಷ್ಣಶೆಟ್ಟಿಗಾರ್ ರ ನಿಧನಕ್ಕೆ ಸಿಪಿಎಂ ಮಂಜೇಶ್ವರ ಮಂಡಲ ಸಮಿತಿ, ಸಿಪಿಐ ಮಂಜೇಶ್ವರ ಮಂಡಲ ಸಮಿತಿ, ಸಿಪಿಎಂ ನೇತಾರ ಕೆ. ಆರ್ ಜಯಾನಂದ, ಎಲ್‌.ಡಿ.ಎಫ್ ಲೋಕಸಭಾ ಅಭ್ಯರ್ಥಿ ಎಂ.ವಿ ಬಾಲಕೃಷ್ಣ ಮಾಸ್ಟರ್, ಮಾಜಿ ಶಾಸಕ ಸಿ. ಎಚ್ ಕುಂಞಿoಬು, ಮಾಜಿ ಕಂದಾಯ ಸಚಿವ ಇ .ಚಂದ್ರಶೇಖರನ್, ಸಿಪಿಐ ಮಂಜೇಶ್ವರ ಮಂಡಲ ಸಮಿತಿ, ಲೋಕಲ್ ಸಮಿತಿ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ, ಎ ಐ ವೈ ಎಫ್ ಮಂಜೇಶ್ವರ ಮಂಡಲ ಸಮಿತಿ ಸಾರ್ವಜನಿಕ ರುದ್ರಭೂಮಿ ಸಮಿತಿ ರಾಮತ್ತ ಮಜಾಲ್ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.