
ಚಕ್ರವರ್ತಿ (ರಿ.) ಹೊಸಂಗಡಿ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ.
ಡಿಸೆಂಬರ್ 04, 2023
0
ಚಕ್ರವರ್ತಿ (ರಿ.) ಹೊಸಂಗಡಿ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ.
<
div class="separator" style="clear: both;">
ಮಂಜೇಶ್ವರ: ಚಕ್ರವರ್ತಿ (ರಿ.) ಹೊಸಂಗಡಿ ಇದರ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರವು ಮಂಗಳೂರು ಹಾರ್ಟ್ ಸ್ಕಾನ್ ಫೌಂಡೇಶನ್ ಇದರ ಆಶ್ರಯದಲ್ಲಿ ಹೊಸಂಗಡಿ ಪ್ರೇರಣ ಹಾಲ್ ನಲ್ಲಿ ನಡೆಯಿತು, ನೂರಾರು ಮಂದಿ ಚಿಕಿತ್ಸೆಯನ್ನು ಪಡೆದರು, ಸಭಾ ಕಾರ್ಯಕ್ರಮವನ್ನು ಹರೀಶ್ ಮಾಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಡಾ. ಮುಕುಂದ, ಡಾ. ಅಮಿತ್ ಕಿರಣ್, ಡಾ. ವಿಜಯ ರೇವನ್ಕರ್ ರವರು ಚಿಕಿತ್ಸೆಯ ಕುರಿತು ಅರಿವು ಮೂಡಿಸಿದರು. ಜಿ.ಆರ್.ಬಿ ರಾಮಪ್ಪ, ಕರುಣಾಕರ ಮಂಜೇಶ್ವರ, ಶುಭಾಶಂಸನೆಗೈದರು. ಎ.ಎಸ್ ಯಾದವ್, ಮೋತಿಕಿರಣ್, ಸುರೇಶ್ ಪರಂಕಿಲ, ಉಪಸ್ಥಿತರಿದ್ದರು. ಕ್ಲಬ್ಬಿನ ಅಧ್ಯಕ್ಷರಾದ ಶಿವಪ್ರಸಾದ್ ಪೆಲಪ್ಪಾಡಿಯವರು ಅಧ್ಯಕ್ಷೀಯ ಭಾಷಣ ಮಾಡಿದರು, ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ದಿನಕರ್ ಬಿ.ಎಂ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


