ಕೊಡುಗೈ ದಾನಿ ಕಣ್ವತೀರ್ಥ ಬೆಂಗರೆ ನಿವಾಸಿ ಸದಾನಂದ. ಎ. ಉದ್ಯಾವರ (72) ನಿಧನ.
ಮಂಜೇಶ್ವರ: ಕಣ್ವತೀರ್ಥ ಬೆಂಗರೆ 'ಸ್ವಾತಿ ನಿಲಯ' ನಿವಾಸಿ ಸದಾನಂದ. ಎ. ಉದ್ಯಾವರ (72) ಅಲ್ಪಕಾಲದ ಅಸೌಖ್ಯದಿಂದ ಸ್ವ - ಗೃಹದಲ್ಲಿ ನಿಧನರಾದರು. ಪತ್ನಿ ಶಾರದಾ, ಮಕ್ಕಳಾದ ಶೈಲೇಶ್, ಸಜಿತ್, ಸ್ವಾತಿ ಸಹಿತ ಅಪಾರ ಬಂಧು- ಮಿತ್ರ ವರ್ಗವನ್ನು ಅವರು ಅಗಲಿದ್ದಾರೆ. ಮೀನುಗಾರಿಕೆ ವೃತ್ತಿ ನಿರ್ವಹಿಸುತ್ತಿದ್ದ ಅವರು ಸಾಮಾಜಿಕ - ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯಾಗಿದ್ದ ಅವರು "ಸದಣ್ಣ" ಎಂದೇ ಖ್ಯಾತರಾಗಿದ್ದು, ಜನಾನುರಾಗಿದ್ದರು.
