ಕುಬಣೂರು ಬಳಿಯ ಒಡ್ಡಂಬೆಟ್ಟು ನಿವಾಸಿ ಗಣಪತಿ ಆಚಾರ್ಯ (75) ನಿಧನ.
ಜುಲೈ 04, 2024
0
ಕುಬಣೂರು ಬಳಿಯ ಒಡ್ಡಂಬೆಟ್ಟು ನಿವಾಸಿ ಗಣಪತಿ ಆಚಾರ್ಯ (75) ನಿಧನ.
ಮಂಜೇಶ್ವರ: ಬಂದ್ಯೋಡ್ ಬಳಿಯ ಕುಬಣೂರು ಒಡ್ಡಂಬೆಟ್ಟು ನಿವಾಸಿ ಗಣಪತಿ ಆಚಾರ್ಯ (75) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಅಪರಾಹ್ನ 2.15 ಕ್ಕೆ ನಿಧನರಾದರು. ಮೃತರು ಬಡಗಿ ವೃತ್ತಿ ಮಾಡುತ್ತಿದ್ದು, ದಿ. ತಿಮ್ಮಯ್ಯ ಆಚಾರ್ಯ - ದಿ. ಸೀತಮ್ಮ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ: ಯಮುನಾ, ಮಕ್ಕಳಾದ: ಶೋಭಾ, ಶಿವ ಪ್ರಸಾದ್ ಆಚಾರ್ಯ, ಕಿರಣ ಆಚಾರ್ಯ, ಅಳಿಯಂದಿರಾದ: ಪು. ಧರ್ಮೇಂದ್ರ ಆಚಾರ್ಯ ದುರ್ಗಿಪಳ್ಳ, ಮನು ಪ್ರಸಾದ್ ಆಚಾರ್ಯ ಬೀರಮಲೆ ಪುತ್ತೂರು, ಸಹೋದರ - ಸಹೋದರಿಯರಾದ ಜನಾರ್ಧನ ಆಚಾರ್ಯ, ರಾಮಕೃಷ್ಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ರತ್ನಾವತಿ, ರೋಹಿಣಿ, ನಿರ್ಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಜಯಂತಿ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 7 ಕ್ಕೆ ಚೆರುಗೋಳಿ ಸ್ಮಶಾನದಲ್ಲಿ ನಡೆಯಲಿದೆ.

